28th SEPTEMBER- DAILY CURRENT AFFAIRS BRIEF

28th SEPTEMBER

 

 

1.ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು ಸುಪ್ರೀಂಕೋರ್ಟ್

SOURCE- https://www.thehindubusinessline.com/news/national/sabarimala-temple-open-for-women-of-all-ages-rules-sc/article25066738.ece

 

 ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ -ಶಬರಿಮಲೆ ದೇಗುಲದ ಬಗ್ಗೆ  ಮತ್ತು  ಶಬರಿಮಲೆ  ದೇವಸ್ಥಾನಕ್ಕೆ ಮಹಿಳೆಯರ  ಪ್ರವೇಶಿಸುವುದನ್ನು ಏಕೆ ನಿಷೇದಿಸಲಾಗಿತ್ತು  ?

ಪ್ರಮುಖ ಸುದ್ದಿ

  • ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
  • ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ ‘ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ’ ಎನ್ನುವ ನೂರಾರು ವರ್ಷಗಳ ನಿರ್ಬಂಧ ತೆರವಾದಂತೆ ಆಗಿದೆ. ಶಬರಿಮಲೆಯ ಅಯ್ಯಪ್ಪ ದೇವರು ಬ್ರಹ್ಮಚಾರಿ ಎನ್ನುವ ಕಾರಣಕ್ಕೆ ದೇಗುಲಕ್ಕೆ ಋತುಸ್ರಾವದ ವಯೋಮಾನದ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಮುಖ್ಯ ಅಂಶಗಳು

  • ‘ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿಹಿಡಿಯುತ್ತದೆ. ಅಯ್ಯಪ್ಪ ದೇವರು ಪ್ರತ್ಯೇಕ ಅಲ್ಲ’ ಎಂದು ಮುಖ್ಯನ್ಯಾಯಮೂರ್ತಿ ದೀಪಕ್‌ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ ಈ ತೀರ್ಪು ನೀಡಿದೆ.
  • ‘ನೈತಿಕತೆಯನ್ನು ಪ್ರತಿಬಂಧಿಸುವ ನಿರ್ಧಾರಗಳಿಗೆ ಕಾರಣ ಏನಿರಬಹುದು ಎಂದು ಮಾನವ ಕುಲ ಪ್ರಾಚೀನ ಕಾಲದಿಂದಲೂ ಹುಡುಕಾಟ ನಡೆಸುತ್ತಲೇ ಇದೆ. ಜೀವನನಾಟಕದಲ್ಲಿ ಪುರುಷನ ಪ್ರಾಧಾನ್ಯತೆ ಎದ್ದು ಕಾಣುತ್ತದೆ. ಆದರೆ ಮಹಿಳೆಗೆ ಮಾತ್ರ ಅಸ್ತಿತ್ವ ಕಂಡುಕೊಳ್ಳುವುದೇ ಸವಾಲಾಗಿದೆ (In the theatre of life, man has put autograph and there is no space for woman to even put her signature).

 

  • ‘ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಗುರುತರ ಹೊಣೆಗಾರಿಕೆಯನ್ನು ಕಾನೂನು ಮತ್ತು ಸಮಾಜ ನಿರ್ವಹಿಸುತ್ತಿದೆ. ದೇವರೊಂದಿಗೆ ಹೊಂದುವ ಯಾವುದೇ ಸಂಬಂಧ ಆಧ್ಯಾತ್ಮಿಕವಾಗಿರುತ್ತದೆ. ಮಹಿಳೆಯನ್ನು ಆಕೆಯ ಲಿಂಗ ಮತ್ತು ಸಹಜವಾಗಿರುವ ಜೈವಿಕ ಕಾರಣಗಳಿಗಾಗಿ ಪ್ರತ್ಯೇಕಿಸುವುದನ್ನು ಒಪ್ಪಲು ಸಾಧ್ಯವಿಲ್ಲ.
  • ‘ಧರ್ಮ ಎನ್ನುವುದು ನಮ್ಮ ಘನತೆಯಿಂದ ನಮ್ಮ ಅಸ್ತಿತ್ವ ಕಂಡುಕೊಳ್ಳಲು ಇರುವ ಜೀವನಪದ್ಧತಿ. ಆದರೆ ಪೂರ್ವಗ್ರಹಪೀಡಿತ ಸಂಪ್ರದಾಯಗಳು ಸಾಮರಸ್ಯಕ್ಕೆ ಧಕ್ಕೆ ತಂದಿವೆ.
  • ‘ಈವರೆಗಿನ ವಿಚಾರಣೆ ಮತ್ತು ದಾಖಲೆಗಳ ಅವಲೋಕನದ ನಂತರ ಅಯ್ಯಪ್ಪ ದೇವರ ಅನುಯಾಯಿಗಳನ್ನು ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ಪಡೆದುಕೊಂಡಿಲ್ಲ, ಅವರೆಲ್ಲರೂ ಹಿಂದೂಗಳು ಎನ್ನುವುದು ಮನವರಿಕೆಯಾಗಿದೆ.
  • ‘ಲಿಂಗತಾರತಮ್ಯ ಅಥವಾ ದೈಹಿಕ ಚಹರೆಯನ್ನು ಆಧರಿಸಿದ ತಾರತಮ್ಯಕ್ಕೂ ಸಂವಿಧಾನದ 25ನೇ ಪರಿಚ್ಛೇದಕ್ಕೂ (ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯ) ಯಾವುದೇ ಸಂಬಂಧವಿಲ್ಲ. ಅಯ್ಯಪ್ಪಸ್ವಾಮಿ ದೇಗುಲದ ನಿಯಮವು ಮಹಿಳೆಗೆ ತನ್ನಿಚ್ಛೆಯ ಆರಾಧನೆ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಲಿಂಗತಾರತಮ್ಯವನ್ನೇ ಮುಖ್ಯವಾಗಿರಿಸಿಕೊಂಡು ಮಹಿಳೆಗೆ ದೇಗುಲ ಪ್ರವೇಶದ ಹಕ್ಕು ನಿರಾಕರಿಸುವುದು ಸಂವಿಧಾನದ ಆಶಯಗಳ ಉಲ್ಲಂಘನೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ತೆರವುಗೊಳಿಸುತ್ತಿದ್ದೇವೆ’.

ಶಬರಿಮಲೆ  ದೇವಸ್ಥಾನದ ಪ್ರಾಮುಖ್ಯತೆ ಏನು?

  • ಇಸ್ಲಾಮಿಕ್ ಧರ್ಮದ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದ ನಂತರ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಎರಡನೇ ಅತಿದೊಡ್ಡ  ಯಾತ್ರಾ ಸ್ಥಳವಾಗಿದೆ.
  • ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.
  • ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರು ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳು ಪ್ರತಿ ವರ್ಷ ಸೆಳೆಯುತ್ತದೆ.
  • ಪರ್ವತಗಳನ್ನು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಬಹುಶಃ ಕೇರಳದೆ ಅತ್ಯುತ್ತಮ ತೀರ್ಥಯಾತ್ರಾ ಸ್ಥಳವಾಗಿದೆ ಶಬರಿಮಲೆ ಆಗಿದೆ. ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿ ಕೊನೆಯಾಗುತ್ತದೆ . ದೇವಾಲಯದ ಭಾರತದ ದಕ್ಷಿಣ ರಾಜ್ಯಗಳ ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ….CLICK HERE TO READ MORE

 

Share