Daily current affairs 22nd August

22nd AUGUST

1.ಭಾರತ-ನೇಪಾಳ ಸಂಬಂಧಗಳು  ಮರಳಿ ಪುನಸ್ಸಿದ್ಧಗೊಳಿಸುತ್ತಿದೆ

ವಿದ್ಯಾರ್ಥಿಗಳ ಗಮನಕ್ಕೆ

 Mains Paper 2: IR | India and its neighborhood- relations.

 ಈ  ISSUE ಬಗ್ಗೆ ಓದಿದ ನಂತರ ಈ ಪ್ರಶ್ನೆಯನ್ನು ಉತ್ತರಿಸುವಿರಿ

ಭಾರತದ ಮಧ್ಯಸ್ಥಿಕೆಯು  ಭಾರತ-ನೇಪಾಳ ಸಂಬಂಧಗಳು ಹದಗೆಡಲು ಹೇಗೆ   ಕಾರಣವಾದವು ಎಂಬುದನ್ನು ಚರ್ಚಿಸಿ. ಹಾಗು ಮರುನಿರ್ಮಾಣಮಾಡಬೇಕೆಂದ್ದರೆ  ಭಾರತದ ಆದ್ಯತೆಗಳು ಯಾವುವು ?

UPSC   ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ:

ಪ್ರಿಲಿಮ್ಸ್ ಗಾಗಿ (Prelims level):   NOT MUCH

ಮುಖ್ಯ ಪರೀಕ್ಷೆಗಾಗಿ ( Mains level): ಭಾರತ-ನೇಪಾಳ ಸಂಬಂಧಗಳು..

ಪ್ರಮುಖ ಸುದ್ದಿ

  • ನೇಪಾಳದಲ್ಲಿ ಭಾರತೀಯರ ಮಧ್ಯಸ್ಥಿಕೆಯು ಹಿಮ್ಮುಖವಾಗಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ನೇಪಾಳ ಪ್ರಧಾನಿ ಭೇಟಿ ಅನುಕೂಲಕರವಾಗಿದೆ
  • ಭಾರತದ ಆಸಕ್ತಿಯು ತನ್ನದೇ ಆದ ನೆರೆಹೊರೆಯ ದೇಶಕ್ಕೆ ಭದ್ರತೆಯನ್ನು  ನೀಡವುದು  ಮತ್ತು ಅದು ಕೇವಲ ರಾಷ್ಟ್ರೀಯ ರಾಜಕೀಯವನ್ನು ಅನುಮತಿಸುವ ಮೂಲಕ ಮತ್ತು  ನೆರೆಹೊರೆಯ ದೇಶಗಳ  ಆಡಳಿತದಲ್ಲಿ  ಹಸ್ತಕ್ಷೇಪವಿಲ್ಲದೆಯೇ ವಿಕಸನಗೊಳಿಸುವುದು.

 

BACK 2 BASICS

ಭಾರತದ ನೇಪಾಳದ  ನೀತಿಯಲ್ಲಿ  – ಏನು ತಪ್ಪಾಗಿದೆ?

  • ಭಾರತ ಮತ್ತು ನೇಪಾಳದ ಸಂಬಂಧಗಳು ಒಮ್ಮೆ ಏರುಮುಖದಲ್ಲಿದ್ದರೆ ಮತ್ತೊಮ್ಮೆ ಇಳಿಮುಖ ಕಂಡಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.2006 ರಲ್ಲಿ ಮಾವೊವಾದಿ ಬಂಡಾಯವನ್ನು ಅಂತ್ಯಗೊಳಿಸಲು ಭಾರತವು ಒಂದು ಮೌಲ್ಯಯುತ ಪಾತ್ರವನ್ನು ವಹಿಸಿತ್ತು . ಆದರೆ ನಂತರದ ದಿನಗಳಲ್ಲಿ ನೇಪಾಳದ ಆಂತರಿಕ ವ್ಯವಹಾರಗಳಲ್ಲಿ ಸೂಕ್ಷ್ಮ ಮಧ್ಯಸ್ಥಿಕೆಯನ್ನು ಉಲ್ಬಣಿಸಿತು .
  • 2014ರಲ್ಲಿ ಕೇಂದ್ರದಲ್ಲಿ  ಹೊಸ  ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿದೇಶಾಂಗ ನೀತಿಯಲ್ಲಿ ಮಹತ್ವದ ಮಾರ್ಪಾಡುಗಳನ್ನು ತಂದು ನೆರೆರಾಷ್ಟ್ರಗಳೊಂದಿಗೆ ಬಾಂಧವ್ಯವೃದ್ಧಿಗೆ ಯತ್ನಿಸುತ್ತಿದೆ. 2014ರಲ್ಲಿ  ನೇಪಾಳದ ಆಗಿನ ಪ್ರಧಾನಿ ಸುಶೀಲ್ ಕೊಯಿರಾಲ ಭಾರತಕ್ಕೆ ಆಗಮಿಸಿದ್ದರು. ಅದಾದ ಬಳಿಕವೂ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಏರ್ಪಟ್ಟಿದ್ದಲ್ಲದೆ, ಹಳೆಯ ಅನುಮಾನಗಳು ದೂರವಾಗಿದ್ದವು. ಅಲ್ಲದೆ, 2014ರ ಆಗಸ್ಟ್ ತಿಂಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು  ದ್ವಿಪಕ್ಷೀಯ ಸಂಬಂಧ ಮಾತುಕತೆಗಾಗಿ ನೇಪಾಳಕ್ಕೆ ಭೇಟಿ ನೀಡುವ ಮೂಲಕ 17 ವರ್ಷಗಳ ನಂತರ ಅಲ್ಲಿಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿದರು.
  • ಹಣಕಾಸಿನ ಹಾಗೂ ಆಹಾರಧಾನ್ಯಗಳ ನೆರವು, ಕಡಿಮೆ ಬಡ್ಡಿದರದಲ್ಲಿ ಅಧಿಕ ಮೊತ್ತದ ಸಾಲ ನೀಡುವುದು, ನೇಪಾಳದಲ್ಲಿ ಭಾರತ ಹೂಡಿಕೆಗೆ ಅವಕಾಶಗಳನ್ನು ಪಡೆದುಕೊಳ್ಳುವುದು- ಈ ಕ್ರಮಗಳ ಮೂಲಕ ನೇಪಾಳವನ್ನು ಆರ್ಥಿಕವಾಗಿ ಭಾರತದ ನಿರ್ಬಂಧಕ್ಕೊಳಪಡಿಸುವ ತಂತ್ರವನ್ನು ಪ್ರಧಾನಿ ಮೋದಿ ಆರಂಭಿಸಿದ್ದರು.
  • ಆದರೆ, ಹೊಸ ಸಂವಿಧಾನ ಜಾರಿ ವಿರೋಧಿಸಿ ನೇಪಾಳದಲ್ಲಿ ಮಧೇಸಿ ಸಮುದಾಯವು ತೀವ್ರ ಹೋರಾಟ ನಡೆಸಿದ ಸಂದರ್ಭದಲ್ಲಿ ಮಧೇಸಿಗಳಿಗೆ ಭಾರತ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ ನೇಪಾಳ ಮತ್ತೆ ಸಂಬಂಧಗಳನ್ನು ಹದಗೆಡಿಸಿಕೊಂಡಿತು.

ಭಾರತಕ್ಕೆ ಹೋಲಿಸಿದರೆ ನೇಪಾಳವು ಚೀನಾದೊಂದಿಗೆ  ಉತ್ತಮ ಸಂಪರ್ಕವನ್ನು ಹೊಂದಿದೆ.

  • ಹಿಮಾಲಯವು ಚೀನಾ ಮತ್ತು ಭಾರತದ ನಡುವೆ ಭೌಗೋಳಿಕವಾಗಿ ತಡೆಯಾಗಿದೆ. ಚೀನಾ ಇದೇ ವೇಗದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಹಿಮಾಲಯ ಹೆಚ್ಚು ಕಾಲ ಹಾಗೆ ಉಳಿಯಲಾರದು. ಮೌಂಟ್ ಎವರೆಸ್ಟ್​ನಲ್ಲಿ ಸುರಂಗ ಕೊರೆದು ಟಿಬೆಟ್ ಮೂಲಕ ನೇಪಾಳ ರಾಜಧಾನಿ ಕಾಠ್ಮಂಡುವಿಗೆ ರೈಲ್ವೆ ಮಾರ್ಗ ನಿರ್ವಿುಸಲು ಚೀನಾ ಉದ್ದೇಶಿಸಿದ್ದು, ಈಗಾಗಲೇ ಅಪಾಯ ಎದುರಿಸುತ್ತಿರುವ ಪರ್ವತಕ್ಕೆ ಇನ್ನಷ್ಟು ಹಾನಿಯಾಗುವ ಆತಂಕ ಕಾಡುತ್ತಿದೆ.
  • ಚೀನಾ ರಾಜಧಾನಿ ಬೀಜಿಂಗ್​ನಿಂದ ಟಿಬೆಟ್​ನ ಖೋಮೋಲಂಗ್ಮಾ ಪ್ರದೇಶದ ಮೂಲಕ ಈ ರೈಲು ಮಾರ್ಗ ಹಾದು ಹೋಗಲಿದೆ. ಹಿಮಾಲಯ ಪರ್ವತಶ್ರೇಣಿಯ ಈ ಪ್ರದೇಶದಲ್ಲಿ ಬೃಹತ್ ಸುರಂಗಗಳನ್ನು ಚೀನಾ ಕೊರೆಯಲಿದೆ ಎನ್ನಲಾಗಿದೆ.
  • ಈಗಾಗಲೇ ಬಿರುಕು ಬಿಟ್ಟಿರುವ ಹಾಗೂ ಕುಸಿಯುತ್ತಿರುವ ಹಿಮಾಲಯಕ್ಕೆ ಈ ಸುರಂಗ ಕಾಮಗಾರಿಯಿಂದಾಗಿ ಇನ್ನಷ್ಟು ಅಪಾಯ ಉಂಟಾಗಬಹುದೆಂಬುದು ಜಾಗತಿಕ ಪರಿಸರ ತಜ್ಞರ ಆತಂಕ. ಅಷ್ಟೇ ಅಲ್ಲ, ನೇಪಾಳದೊಂದಿಗೆ ಚೀನಾದ ಸಂಪರ್ಕ ಪೂರ್ಣವಾಗಿ ಸ್ಥಾಪಿತವಾದಾಗ ಚೀನೀ ಸೇನೆ ಭಾರತದ ಗಡಿಗೇ ಬಂದಂತಾಗುತ್ತದೆ! ಆಗ ಸಿಲಿಗುರಿ ಕಾರಿಡಾರ್ ಇನ್ನಷ್ಟು ಅಪಾಯಕ್ಕೆ ಸಿಲುಕಲಿದೆ. ಸಿಲಿಗುರಿ ‘ಜಗಲಿ’ ಭಾರತದ ಮುಖ್ಯ ಭೂಭಾಗ ಮತ್ತು ಈಶಾನ್ಯಭಾರತದ ನಡುವಣ ಸಂಪರ್ಕದ ಏಕೈಕ ಮಾರ್ಗವಾಗಿದೆ. ಅಲ್ಲಿ ನೇಪಾಳ-ಬಾಂಗ್ಲಾ ಗಡಿಗಳ ನಡುವಣ ಅಂತರ ಕೇವಲ 87 ಕಿ.ಮೀ.

ಚೀನಾಕ್ಕೂ ಸುಲಭವಲ್ಲ

  • ನೇಪಾಳಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವುದು ಸುಲಭವೇನೂ ಅಲ್ಲ. ನೇಪಾಳ-ಚೀನಾ ನಡುವೆ ಇರುವುದು ಪರ್ವತಮಯ ಪ್ರದೇಶ. ಅಲ್ಲಿ ರೈಲುಮಾರ್ಗ ನಿರ್ವಿುಸಲು ಚೀನಾಕ್ಕೆ ಸಾಕಷ್ಟು ಕಾಲಾವಕಾಶ ಬೇಕು.
  • ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಭಾರತ ನೇಪಾಳದೊಂದಿಗಿನ ಬಾಂಧವ್ಯವನ್ನು ಮರುಸ್ಥಾಪಿಸಬೇಕು. ಅಲ್ಲದೆ, ಭಾರತಕ್ಕೆ ನೇಪಾಳದ ಅಗತ್ಯಕ್ಕಿಂತಲೂ ಹೆಚ್ಚಾಗಿ ನೇಪಾಳಕ್ಕೆ ಭಾರತದ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕಿದೆ.

ಭದ್ರತಾ ಆತಂಕ

  • ಮೂಲಸೌಕರ್ಯ ವಿಸ್ತರಣೆ, ವಾಣಿಜ್ಯ ಸಂಬಂಧದ ನೆಪದಲ್ಲಿ ಚೀನಾವು ನೇಪಾಳದ ಆಂತರಿಕ ಬೆಳವಣಿಗೆಗಳಲ್ಲಿ ಮೂಗು ತೂರಿಸುತ್ತಿರುವುದು ರಹಸ್ಯವಾಗೇನೂ ಉಳಿದಿಲ್ಲ. ‘ನಿಮ್ಮ ದೇಶದ ಆರ್ಥಿಕ, ವಾಣಿಜ್ಯ ಅಭಿವೃದ್ಧಿ ನಮ್ಮಿಂದಲೇ ಸಾಧ್ಯ’ ಎಂದು ಚೀನಿ ನಾಯಕರು ನೇಪಾಳವನ್ನು ನಂಬಿಸಲು ಹೊರಟಿದ್ದಾರೆ.
  • ಈ ‘ಬಾಂಧವ್ಯದ ಮುಸುಕಿನಲ್ಲಿ ಒಂದೊಮ್ಮೆ ಚೀನೀ ಸೈನಿಕರು ನೇಪಾಳಕ್ಕೆ ಪ್ರವೇಶಪಡೆದರೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿರುವ ಮಾವೋವಾದಿಗಳಿಗೆ ಮತ್ತಷ್ಟು ಬಲ ಬರುತ್ತದೆ. ಅದು ಭಾರತದ ಆಂತರಿಕ ಸುರಕ್ಷೆಗೆ ಅಪಾಯಕಾರಿ ಎಂದು ಬಿಡಿಸಿ ಹೇಳಬೇಕಿಲ್ಲ.

ಭಾರತಕ್ಕೆ ಸತತ ಹಿನ್ನಡೆ

  • ನೇಪಾಳದಲ್ಲಿ ಭಾರತದ ಕಂಪನಿಗಳ ಕತ್ತುಹಿಸುಕುವ ಕೆಲಸವನ್ನು ಚೀನಾ ತುಂಬ ವ್ಯವಸ್ಥಿತವಾಗಿ ಮಾಡುತ್ತಿದೆ. ಇದಕ್ಕೆ ಉದಾಹರಣೆಯೆಂದರೆ, ನೇಪಾಳದ ತ್ರಿಭುವನ್ ವಿಮಾನ ನಿಲ್ದಾಣ ನವೀಕರಣ ಹಾಗೂ ಅದನ್ನು ಮೇಲ್ದರ್ಜೆಗೇರಿಸುವ ಒಪ್ಪಂದಕ್ಕೆ ಭಾರತದ ಕಂಪನಿಗಳು ಆಸಕ್ತಿ ತೋರಿಸಿದ್ದವು. ಆದರೆ ನೇಪಾಳದ ರಾಜಕೀಯ ಕಾರಣಗಳು ಹಾಗೂ ಚೀನಾದ ಪಿತೂರಿಯಿಂದಾಗಿ ಈ ಯೋಜನೆ ಭಾರತಕ್ಕೆ ಲಭಿಸಲೇ ಇಲ್ಲ.
  • ನೇಪಾಳದ ಪಶ್ಚಿಮ ಸೇತಿ ಜಲವಿದ್ಯುತ್ ಯೋಜನೆಯ ಬೃಹತ್ ಮೊತ್ತದ ಒಪ್ಪಂದವು ಕೊನೆಕ್ಷಣದಲ್ಲಿ ಭಾರತದ ಕಂಪನಿಯ ಕೈತಪ್ಪಿ ಚೀನಾ ಪಾಲಾಯಿತು. ಹೀಗೆ, ನೇಪಾಳವು ಕಳೆದ ಐದು ದಶಕಗಳಿಂದ ಭಾರತದಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಲೇ ಚೀನಾಕ್ಕೆ ಆಪ್ತನಾಗಿ ವರ್ತಿಸುತ್ತಿದೆ. ಇದು ಭಾರತದ ಹಿತಾಸಕ್ತಿಗೆ ಮಾರಕ.

2016ರಲ್ಲಿ ಭಾರತ-ನೇಪಾಳ ನಡುವೆ ಏರ್ಪಟ್ಟ ಒಪ್ಪಂದಗಳು

  • ಭೂಕಂಪದ ಬಳಿಕ ನೇಪಾಳ ಪುನರ್ ನಿರ್ವಣಕ್ಕಾಗಿ 250 ಮಿಲಿಯನ್ ಡಾಲರ್ ಮೊತ್ತದ ಅನುದಾನ ಬಳಕೆ.
  • ನೇಪಾಳದ ಟೆರಾಯ್ ರಸ್ತೆ ಸುಧಾರಣೆ.
  • ಸಾಂಸ್ಕೃತಿಕ ಸಹಕಾರ.
  • ಕಾಕರ್​ಬಿಟ್ಟಾ ಸಂಚಾರ ವ್ಯವಸ್ಥೆ.
  • ವಿಶಾಖಪಟ್ಟಣ ಬಂದರಿಗೆ ಚಾಲನೆ.
  • ವಿಶಾಖಪಟ್ಟಣಕ್ಕೆ ರೈಲು ಸಂಚಾರ.
  • ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ.
  • ಬಂಡವಾಳ ಹೂಡಿಕೆಗೆ ಒತ್ತು.
  • ಜಲವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸಹಕಾರ.

ನೇಪಾಳ ಮತ್ತು ಭಾರತದ ನಡುವೆ  ಗಟ್ಟಿ ಸಂಬಂಧಬೆಳೆಯಲು ಎರಡು ರಾಷ್ಟ್ರ ಗಳು   ಏಕಾಗ್ರತೆ ಮತ್ತು ನಿರ್ಣಯತೆಗೆ  ಅಗತ್ಯವಿರುವ ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ.

http://www.thehindu.com/opinion/lead/rebooting-india-nepal-ties/article19535631.ece

 

2.ಎಫ್‍ಡಿಐ ಶೇ 35 ರಿಂದ 10.4 ಶತಕೋಟಿ ಡಾಲರ್ ಗೆ ಏರಿಕೆ

ವಿದ್ಯಾರ್ಥಿಗಳ ಗಮನಕ್ಕೆ

Mains Paper 3: Economy | Mobilization of resources

UPSC   ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

Prelims level: ವಿದೇಶಿ ನೇರ ಬಂಡವಾಳಹೂಡಿಕೆ 

Mains level: ಭಾರತದಲ್ಲಿ ವಿದೇಶಿ ನೇರ ಬಂಡವಾಳಹೂಡಿಕೆಯ ಹರಿವು – ಅದರ ಮುಂದೆ ಇರುವ ಸವಾಲುಗಳು

 ಪ್ರಮುಖ ಸುದ್ದಿ

  • ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶಕ್ಕೆ ವಿದೇಶಿ ನೇರ ಹೂಡಿಕೆ (FDI) ಶೇ 37 ರಿಂದ 4 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ.
  • ‘ಮೇಕ್ ಇನ್ ಇಂಡಿಯಾ’ ಯೋಜನೆ (ಅಕ್ಟೋಬರ್ 2014 – ಜೂನ್ ) ಪ್ರಾರಂಭವಾದಾಗಿನಿಂದ ವಿದೇಶಿ ಒಳಹರಿವು ಶೇ 64 ರಷ್ಟು . ಏರಿಕೆಯಾಗಿ12 ಶತಕೋಟಿ ಡಾಲರ್ ಗೆ  ತಲುಪಿದೆ.
  • ಅತಿ ಹೆಚ್ಚಿನ ವಿದೇಶಿ ಒಳಹರಿವನ್ನು ಆಕರ್ಷಿಸುವ ವಿಭಾಗಗಳೆಂದರೆ .ಟೆಲಿಕಾಂ,ಸೇವೆಗಳು, ವ್ಯಾಪಾರ, ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಮತ್ತು ಆಟೋಮೊಬೈಲ್ಗಳು.
  • ಸಿಂಗಾಪುರ್, ಮಾರಿಷಸ್, ನೆದರ್ಲ್ಯಾಂಡ್ಸ್ ಮತ್ತು ಜಪಾನ್ ದೇಶಗಳಿಂದ ಅತಿ ಹೆಚ್ಚು FDI ಒಟ್ಟು ಮೊತ್ತವು ಬಂದಿತ್ತು.
  • ವಿದೇಶಿ ಒಳಹರಿವನ್ನು ಆಕರ್ಷಿಸಲು ಸರ್ಕಾರ ಹಲವಾರು ಹಂತಗಳನ್ನು ಘೋಷಿಸಿದೆ. ಇದರಲ್ಲಿ FDI ನೀತಿಯ ಉದಾರೀಕರಣ ಮತ್ತು ವ್ಯಾಪಾರದ ವಾತಾವರಣದಲ್ಲಿ ಸುಧಾರಣೆಗಳನ್ನು ಒಳಗೊಂಡಿವೆ.

 

BACK 2 BASICS 

ವಿದೇಶಿ ನೇರ ಬಂಡವಾಳಹೂಡಿಕೆ  ಎಂದರೇನು?

  • ವಿದೇಶಿ ಬಂಡವಾಳವು ಇಂದು ವಿವಿಧ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ವಿದೇಶಿ ಬಂಡವಾಳದ ಪಾತ್ರ ಹಿರಿದಾದುದಾಗಿದೆ. ವಿದೇಶಿ ಬಂಡವಾಳ ಎ೦ದರೆ ಕೇವಲ ವಿದೇಶಿ ಹಣದ ನೆರವು ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಇಂದು ವಿದೇಶಿ ಬಂಡವಾಳದ ಹೆಸರಿನಲ್ಲಿ ಯಂತ್ರಗಳು,ತಂತ್ರಜ್ಞಾನ, ತರಬೇತಿ, ಉತ್ಪಾದನಾ ನೈಪುಣ್ಯತೆ ಮುಂತಾದವುಗಳೂ ಕೂಡಾ ಲಭ್ಯವಾಗುತ್ತಿವೆ. ಆದ್ದರಿಂದ ವಿದೇಶಿ ಬಂಡವಾಳವನ್ನು ಸೌಮ್ಯ ಭಾಷೆಯಲ್ಲಿ “ವಿದೇಶಿ ನೆರವು” ಎಂದು ಕರೆಯಲಾಗಿದೆ.
  • ಆರ್ಥಿಕಾಭಿವೃದ್ಡಿಗಾಗಿ ವಿದೇಶಿ ಬಂಡವಾಳವನ್ನು ಆಮದು ಮಾಡಿಕೊಳ್ಳುವ ಪರಿಪಾಠ ಹೊಸದೇನಲ್ಲ. ಇಂದು ಮುಂದುವರಿದ ಶ್ರೀಮಂತ ದೇಶಗಳೆಂದು ಕರೆಸಿಕೊಳ್ಳುತ್ತಿರುವ ದೇಶಗಳೂ ಕೂಡ ಅಭಿವೃದ್ದಿಯ ಆರಂಭಿಕ ಹಂತದಲ್ಲಿ ವಿದೇಶಿ ಬಂಡವಾಳವನ್ನು ಬಳಸಿಕೊಂಡಿವೆ.
  • 17 ಮತ್ತು 18ನೇ ಶತಮಾನದಲ್ಲಿ ಇಂಗ್ಲೆಂಡ್ ಹಾಲೆಂಡ್ ದೇಶದಿಂದ ಬಂಡವಾಳದ ನೆರವು ಪಡೆದಿದ್ದರೆ, 19ನೇ ಶತಮಾನದಲ್ಲಿ ಯೂರೋಪಿನಿಂದ ಬೃಹತ್ ಪ್ರಮಾಣದಲ್ಲಿ ಹಣ ಹರಿದು ಬಂದುದರಿಂದ ಅಮೇರಿಕಾ ತೀವ್ರ ಪ್ರಗತಿ ಸಾಧಿಸುವುದು ಸಾಧ್ಯವಾಯಿತು. ರಷ್ಯಾ ಕೂಡಾ ಪ್ರಾರಂಭದಲ್ಲಿ ವಿದೇಶಿ ಹಣದ ನೆರವಿನಿಂದಲೇ ಪ್ರಗತಿ ಸಾಧಿಸಿತು. ವಿದೇಶಿ ಬಂಡವಾಳದ ನೆರವಿನಿಂದ ಅನೇಕ ದೇಶಗಳು ತ್ವರಿತ ಆರ್ಥಿಕಾಭಿವೃದ್ದಿಯನ್ನು ಸಾಧಿಸಿವೆ .
  • ವಿದೇಶಿ ನೆರವಿನ ಜೊತೆಗೆ ತಂತ್ರಜ್ಞಾನ, ಉತ್ಪಾದನಾ ನೈಪುಣ್ಯತೆ,ಯಂತ್ರೋಪಕರಣಗಳು ಹಾಗೂ ಮತ್ತಿತರ ನೆರವುಗಳೂ ಕೂಡಾ ಹರಿದು ಬರುವುದರಿಂದ ತ್ವರಿತ ಪ್ರಗತಿ ಸಾಧ್ಯವಾಗುತ್ತದೆ. ವಿದೇಶಿ ಬಂಡವಾಳವು ಹಿಂದುಳಿದ ಬಡರಾಷ್ಟ್ರಗಳಲ್ಲಂತೂ ತುಂಬಾ ಮಹತ್ತರ ಪಾತ್ರವನ್ನು ವಹಿಸುತ್ತಿದೆ.

ವಿದೇಶಿ ಬಂಡವಾಳಾದ ಪ್ರಕಾರಗಳು

1.ವಿದೇಶಿ ಖಾಸಗಿ ಬಂಡವಾಳ

  • ವಿದೇಶಗಳ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಬೇರೆ ಬೇರೆ ದೇಶಗಳಲ್ಲಿ ಬಂಡವಾಳವನ್ನು ತೊಡಗಿಸಿದರೆ ಅದನ್ನು ವಿದೇಶಿ ಖಾಸಗಿ ಬಂಡವಾಳ ಎಂದು ಕರೆಯುವರು.
  • ಅಂದರೆ ವಿದೇಶಿ ಖಾಸಗಿ ಬಂಡವಾಳವು ಮುಖ್ಯವಾಗಿ ವಿದೇಶಿ ಜನಗಳು ವಿಶ್ವದ ಇತರೆ ದೇಶಗಳಲ್ಲಿ ಮಾಡುವ ಬಂಡವಾಳ ಹೂಡಿಕೆಯಾಗಿದೆ.ಬಹುರಾಷ್ಟ್ರೀಯ ನಿಗಮಗಳು ಹೂಡುವ ಬಂಡವಾಳ ಇದರ ಒಂದು ಉತ್ತಮ ಉದಾಹರಣೆಯಾಗಿದೆ.ವಿದೇಶಿ ಖಾಸಗಿ ಬಂಡವಾಳವು ಮುಖ್ಯವಾಗಿ ನೇರಹೂಟೆ ಮತ್ತು ಪರೋಕ್ಷ ಹೂಟೆಯನ್ನು ಒಳಗೊಂಡಿರುತ್ತದೆ.

2.ವಿದೇಶಿ ಸಾರ್ವಜನಿಕ ಬಂಡವಾಳ

  • ವಿದೇಶಿ ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳು ನೀಡುವ ನೆರವು ವಿದೇಶಿ ಸಾರ್ವಜನಿಕ ಬಂಡವಾಳವಾಗುತ್ತದೆ.
  • ವಿದೇಶಿ ಸಾರ್ವಜನಿಕ ಬಂಡವಾಳದಲ್ಲಿ ಪ್ರಮುಖವಾಗಿ ದ್ವಿಪಕ್ಷೀಯ ನೆರವು,ಬಹುಪಕ್ಷೀಯ ನೆರವು,ದಾನಹಣ,ರಫ್ತುಸಾಲ ಮುಂತಾದವುಗಳು ಸೇರಿಕೊಂಡಿರುತ್ತದೆ. ವಿದೇಶಿಯ ನೆರವು ಖಾಸಗಿಯಾದರೂ ಆಗಬಹುದು ಅಥವಾ ಸಾರ್ವಜನಿಕವಾದರೂ ಆಗಬಹುದು .ಒಟ್ಟಿನಲ್ಲಿ ವಿದೇಶಿಗಳಿಂದ ಹರಿದು ಬರುವ ಅಥವಾ ಚಲನೆಯಾಗುವ ನೆರವು ಅಥವಾ ಬಂಡವಾಳ.

ಭಾರತಕ್ಕೆ FDI ಏಕೆ ಮುಖ್ಯ?

  • ಭಾರತವು ಅದರ ಮೂಲಭೂತ ಸೌಕರ್ಯ ಕ್ಷೇತ್ರಗಳಾದ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಹೆದ್ದಾರಿಗಳ ಬೆಳವಣಿಗೆಯನ್ನು ಹೆಚ್ಚಿಸಲು  1 ಟ್ರಿಲಿಯನ್ ಯುಎಸ್ ಡಾಲರ್ ಅಗತ್ಯತೆ ಇದೆ   .
  • ಬಲವಾದ ವಿದೇಶಿ ಹೂಡಿಕೆಗಳ ಒಳಹರಿವು ದೇಶದ ಆರ್ಥಿಕ  ಸಮತೋಲನ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಮತ್ತು ಇದು ಇತರ ಜಾಗತಿಕ ಕರೆನ್ಸಿಗಳ ವಿರುದ್ಧ, ವಿಶೇಷವಾಗಿ ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯವನ್ನು ಹಿಚ್ಚಿಸುತ್ತಿದೆ.

 

http://economictimes.indiatimes.com/news/economy/finance/fdi-jumps-37-to-10-4-billion-during-april-june-2017/articleshow/60163515.cms

 

3.ರಾಷ್ಟ್ರೀಯ ಅಪರಾಧದ ಡೇಟಾಬೇಸ್ ರಚಿಸಲುಡಿಜಿಟಲ್ ಪೋಲಿಸ್ ಪೋರ್ಟಲ್

ವಿದ್ಯಾರ್ಥಿಗಳ ಗಮನಕ್ಕೆ

 Mains Paper 3: Internal Security | Challenges to internal security through communication networks, role of media and social networking sites in internal security challenges,

UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ

ಪ್ರಿಲಿಮ್ಸ್ ಗಾಗಿ (Prelims level): CCTNS ಎಂದರೇನು?

ಮೇನ್ಸ್ ಗಾಗಿ (Mains level): ದೇಶದಲ್ಲಿ  ನಡೆಯುತ್ತಿರುವ ಕ್ರಿಮಿನಲ್ ಚಟುವಟಿಕೆಗಳನ್ನು ಎದುರಿಸಲು ಪರಿಣಾಮಕಾರಿಯಾಗಿದೆಯೇ ??.

   ಪ್ರಮುಖ ಸುದ್ದಿ

  • ಕೇಂದ್ರ ಗೃಹ ಸಚಿವಾಲಯವು CCTNS (ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ಸ್ ಮತ್ತು ಸಿಸ್ಟಮ್ಸ್) ಯೋಜನೆಯಲ್ಲಿ ಡಿಜಿಟಲ್ ಪೊಲೀಸ್ ಪೋರ್ಟಲ್ ನ್ನು ಪ್ರಾರಂಭಿಸಿದೆ.
  • ಇದು ಅಪರಾಧಗಳು ಮತ್ತು ಅಪರಾಧಿಗಳ ರಾಷ್ಟ್ರೀಯ ಅಪರಾಧ ದತ್ತಾಂಶಗಳನ್ನು ರಚಿಸಲು, ಅನುಕೂಲವಾಗಲಿದೆ.
  • ಈ ಪೋರ್ಟಲ್ ನಲ್ಲಿ ಆನ್ಲೈನ್ ದೂರುಗಳನ್ನು  ನೋಂದಣಿ ಮಾಡಲು  ಮತ್ತು ಹಿಂದಿನ ಪೂರ್ವ ಪರಿಶೀಲನೆಗಾಗಿ ವಿನಂತಿಗಳನ್ನು ಅನುಮತಿಸುತ್ತದೆ

 

BACK 2 BAISCS

 CCTNS ಎಂದರೇನು?

  • ಸಿ.ಸಿ.ಟಿ.ಎನ್.ಎಸ್(CCTNS) ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ಸ್ ಮತ್ತು ಸಿಸ್ಟಮ್ಸ್ಎಂದು ಸಂಕ್ಷಿಪ್ತವಾಗಿ ಹೇಳಲಾಗುತ್ತದೆ. .ಇದು ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಪೊಲೀಸ್ ಠಾಣೆಗಳನ್ನು ಡಿಜಟಲೀಕರಣಕ್ಕೆ ಒಳಪಡಿಸುವ ಮತ್ತು ತಂತ್ರಜ್ಞಾನದ ಮೂಲಕ ಪೊಲೀಸಿಂಗ್ ನಿರ್ವಹಿಸಲು 2009ರಲ್ಲಿ ಮಹತ್ವಾಕಾಂಕ್ಷೆಯ ಸಿಸಿಟಿಎನ್‌ಎಸ್ ಯೋಜನೆ ಜಾರಿಗೊಳಿಸಲಾಗಿತ್ತು.
  • An additional objective of establishing a basic platform for an Inter-operable Criminal Justice System (ICJS) was added to the Project In 2015.
  • ಅಪರಾಧಗಳ ಪತ್ತೆ ಮತ್ತು ನಿಯಂತ್ರಣಕ್ಕೆ ಇಂಟರ್‌ನೆಟ್ ತಂತ್ರಜ್ಞಾನ ಬಳಸಿಕೊಳ್ಳುವುದು ಇದರ ಮುಖ್ಯ ಉದ್ದೇಶ.ಠಾಣೆಯಲ್ಲಿ ದೂರು ದಾಖಲು ಮಾಡುವುದು, ಎಫ್‌ಐಆರ್ ದಾಖಲು, ನ್ಯಾಯಾಲಯಗಳಿಗೆ ವರದಿ ಸಲ್ಲಿಕೆ ಸೇರಿದಂತೆ ಎಲ್ಲ ವರದಿಗಳನ್ನೂ ಡಿಜಿಟಲ್ ಮೂಲಕವೇ ನಿರ್ವಹಿಸಲಾಗುತ್ತದೆ.
  • ದೂರುದಾರರಿಗೆ ಒಂದು ಸಂಖ್ಯೆ ನೀಡಿ ವೆಬ್‌ಸೈಟ್ ಮೂಲಕವೇ ಎಲ್ಲಿ ಬೇಕಾದರೂ ಕುಳಿತು ತಮ್ಮ ದೂರಿನ ಪ್ರಗತಿ ತಿಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

 

4.ಸ್ವಸ್ಥ ಬಚ್ಚೆಸ್ವಸ್ಥ ಭಾರತ್

ವಿದ್ಯಾರ್ಥಿಗಳ ಗಮನಕ್ಕೆ

Mains Paper 2: Governance | Welfare schemes for vulnerable sections of the population by the Centre and States and the performance of these schemes; mechanisms, laws, institutions and Bodies constituted for the protection and betterment of these vulnerable sections.

UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ:

ಪ್ರಿಲಿಮ್ಸ್ ಗಾಗಿ (Prelims level): ಈ ಕಾರ್ಯಕ್ರಮದ ಉದ್ದೇಶವೇನು?ಯಾರು ಇದ್ದನು ಹೊರ ತಂದವರು ??

ಮೇನ್ಸ್ ಗಾಗಿ (Mains level):   ಸ್ವಸ್ಥ ಬಚ್ಚೆ -ಸ್ವಸ್ಥ ಭಾರತ್ ಕಾರ್ಯಕ್ರಮವನ್ನು ಸ್ವಚ್ಛ ಭಾರತ್ ಕಾರ್ಯ ಕ್ರಮದ ಜೊತೆಗೆ ಹೋಲಿಸಿ,

ಪ್ರಮುಖ ಸುದ್ದಿ

  • ಸ್ವಸ್ಥ ಬಚ್ಚೆ -ಸ್ವಸ್ಥ ಭಾರತ್ ಕಾರ್ಯಕ್ರಮವು ಕೇಂದ್ರೀಯ ವಿದ್ಯಾಲಯದವರು  12 ಲಕ್ಷಕ್ಕಿಂತಲೂ ಹೆಚ್ಚು   ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯ ಮತ್ತು ಫಿಟ್ನೆಸ್ ಪ್ರೊಫೈಲ್ ಕಾರ್ಡ್ ತಯಾರಿಸಲು  ಇತ್ತೀಚಿಗೆ ಕೊಚ್ಚಿಯಲ್ಲಿ ಬಿಡುಗಡೆ ಗೊಳಿಸಿದರು.

  ಕಾರ್ಯಕ್ರಮದ  ಬಗ್ಗೆ  ಮುಖ್ಯವಾಗಿ  ತಿಳಿಯಬೇಕಾದದ್ದು ಏನು?

  • ಸ್ವಸ್ಥ ಬಚ್ಚೆ -ಸ್ವಸ್ಥ ಭಾರತ್ ಕಾರ್ಯಕ್ರಮವು   ಎಲ್ಲಾ ವಯಸ್ಸಿನ ಮತ್ತು ವಿಭಿನ್ನ ಸಾಮರ್ಥ್ಯಗಳವುಳ್ಳ (different abilities.)  ಮಕ್ಕಳಿಗೆ ಸಮಗ್ರ ಮತ್ತು ಅಂತರ್ಗತ ವರದಿಯನ್ನು ಒದಗಿಸುತ್ತದೆ.
  • ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ನ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರು ಮತ್ತು ಪೋಷಕರನ್ನು ಅರಿತುಕೊಳ್ಳುವುದು ಮತ್ತು ಪ್ರತಿದಿನದ 60 ನಿಮಿಷಗಳ ಆಟದ ಪ್ರೋತ್ಸಾಹವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
  • ಇತರ ಉದ್ದೇಶಗಳೆಂದರೆ -ಒಲಿಂಪಿಕ್ಸ್ ನ ಮೌಲ್ಯಗಳನ್ನು ಮತ್ತು  ಪ್ಯಾರಾಲಿಂಪಿಕ್ಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು  ನಡುವೆಅನ್ನು ಇಂಪ್ಲಿಬ್ ಮಾಡಿ.
  • ದೈಹಿಕ ಚಟುವಟಿಕೆಯನ್ನು ಮತ್ತು ಮನರಂಜನಾ ಆಟಗಳನ್ನು ಕಲಿಕೆಯ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿ ಮಾಡಿ.ಅವರ ಬಾಲ್ಯದ ಜೀವನಲ್ಲಿ ಸದೃಢ ವಾಗಿಸುವುದು.

 

5.ಪ್ರಧಾನಿಯಿಂದ ಮಣ್ಣಿನ ಆರೋಗ್ಯ ಕಾರ್ಡುಗಳ ಪರಾಮರ್ಶೆ.

ವಿದ್ಯಾರ್ಥಿಗಳ ಗಮನಕ್ಕೆ

 Major crops cropping patterns in various parts of the country, different types of irrigation and irrigation systems storage, transport and marketing of agricultural produce and issues and related constraints; e-technology in the aid of farmers.

    UPSC  ದೃಷ್ಟಿಕೋನದಿಂದ, ಈ ಕೆಳಗಿನ ವಿಷಯಗಳು ಮುಖ್ಯ:

ಪ್ರಿಲಿಮ್ಸ್ ಗಾಗಿ(PRILIMS LEVEL) -ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಬಗ್ಗೆ

ಮೇನ್ಸ್ ಗಾಗಿ(MAINS LEVEL) -ರೈತರಿಗಾಗಿ ಹಲವಾರು ಯೋಜನೆಗಳಿದ್ದರು ಪ್ರತಿ ವರ್ಷ ಬೆಳೆಗಳ ನಷ್ಠತೆ ಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ವಾಗಿ ಈ ಯೋಜನೆ ಹೇಗೆ ಅನುಕೂಲವಾಗುತಿದ್ದೆ ಎಂದು ಪರೀಕ್ಷಿಸಿ.

ಪ್ರಮುಖ ಸುದ್ದಿ

  • ಮಣ್ಣು ಆರೋಗ್ಯ ಕಾರ್ಡ್ಗಳನ್ನು ಪ್ರಸ್ತುತ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆ ಮಾಡಲಾಗಿದ್ದು,ಉಳಿದ ರಾಜ್ಯಗಳಲ್ಲಿ ವಾರದೊಳಗೆ ವಿತರಣೆ ಮಾಡಲಾಗುವುದು ಎoದು  ಪ್ರಧಾನಿ  ನರೇಂದ್ರಮೋದಿ ಹೇಳಿದ್ದಾರೆ.

ಪ್ರಸ್ತಾವಿಸಲಾಗಿರುವ ಸುಧಾರಣಾ ಕ್ರಮಗಳು  

  • ವಿವಿಧ ಮಾದರಿಯಲ್ಲಿ ಮಣ್ಣನ್ನು ಮಣ್ಣಿನ ಪರೀಕ್ಷಾ ಲ್ಯಾಬ್ಗಳಲ್ಲಿ  ಪರೀಕ್ಷಿಸಿ  ಸೂಕ್ತ ಪರಿಶೀಲನೆಗಳನ್ನು ವಿಲೇವಾರಿಗಾಗಿ ಕೈಗೊಳ್ಳಬೇಕು. ಇದು ವರದಿಗಳಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.,
  • ಮಣ್ಣು ಆರೋಗ್ಯ ಕಾರ್ಡ್ಗಳನ್ನು ಆಯಾ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ಮುದ್ರಣಮಾಡಬೇಕು,ಇoದರಿಂದ ರೈತರಿಗೆ ಇದರ ಮಹತ್ವ ಅರಿತುಕೊಳ್ಳಲು ಹೆಚ್ಹು ಸಹಾಯಕವಾಗುತ್ತದೆ .
  • ಮಣ್ಣಿನ ಪರೀಕ್ಷೆಯನ್ನು ಸಾಧನಗಳನ್ನು ಕೈಗಟಕುವ ರೀತಿಯಲ್ಲಿ ದೊರೆಯುವ ಹಾಗೆ   ಪ್ರಾರಂಭಿಕ ಉದ್ಯಮಿಗಳನ್ನು (tart-ups)  ಪ್ರೋತ್ಸಾಹಿಸುವುದು .

BACK TO BASICS

 ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಬಗ್ಗೆ

  • ಕೇಂದ್ರ ಸರ್ಕಾರದಿಂದ ( cost will be shared in the ratio of 75:25 between the Centre and states). ಆರಂಭವಾದ ಈ ಯೋಜನೆಯಡಿಯಲ್ಲಿ ಪ್ರತೀ ರೈತನ ಭೂಮಿಯ ಮಣ್ಣನ್ನು ಪರೀಕ್ಷಿಸಿ ಆ ಮಣ್ಣಿನ ಫಲವತ್ತತೆ ಮತ್ತಿತರ ವಿಚಾರಗಳನ್ನೊಳಗೊಂಡ ಬಗ್ಗೆ ಕಾರ್ಡ್ ಒಂದನ್ನು ವಿತರಿಸಲಾಗುತ್ತಿದೆ.
  • ವಿತರಿಸಲಾದ ಕಾರ್ಡ್​ನಲ್ಲಿ ಆ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಸಲಹೆಗಳಿರುತ್ತವೆ, ಜತೆಗೆ ಆ ಬೆಳೆಗೆ ಬಳಸಬೇಕಾದ ರಸಗೊಬ್ಬರ, ನೀಡಬೇಕಾದ ಖನಿಜ ಮಿಶ್ರಣಗಳ ಪ್ರಮಾಣವನ್ನು ನಮೂದು ಮಾಡಲಾಗಿರುತ್ತದೆ.
  • ಇದರಿಂದಾಗಿ ರೈತರು ತಮ್ಮ ಭೂಮಿಯ ಫಲವತ್ತತೆಗೆ ತಕ್ಕಂಥ ಬೆಳೆಯನ್ನು ಅಧಿಕೃತ ರಸಗೊಬ್ಬರಗಳನ್ನು ಬಳಸುವ ಮೂಲಕ ಬೆಳೆದು ಹೆಚ್ಚುವರಿ ಇಳುವರಿ ಪಡೆಯಲು ಸಹಾಯವಾಗುತ್ತದೆ.
  • ದೇಶಾದ್ಯಂತ ಎಲ್ಲ ರೈತರ ಸಾಗುವಳಿ ಜಮೀನಿನ ಮಣ್ಣಿನ ಮಾದರಿಯನ್ನು ಪರೀಕ್ಷಿಸಿ ನಂತರ ಅವರಿಗೆ ಮಣ್ಣಿನ ಫಲವತ್ತತೆ ಬಗ್ಗೆ ಕಾರ್ಡ್ ನೀಡಲಾಗುತ್ತದೆ. ಪ್ರತೀ ಜಮೀನಿನ ಮಣ್ಣಿನ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ.
  • ಅಲ್ಲಿ ಸೂಕ್ತ ತಜ್ಞರಿಂದ ಮಣ್ಣಿನ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಮುಖ್ಯವಾಗಿ ಮಣ್ಣು ಒಳಗೊಂಡಿರುವ ಖನಿಜಗಳು, ರಾಸಾಯನಿಕಗಳ (primary nutrients (nitrogen, phosphorus, and potassium), secondary nutrients (such as sulphur), and micro-nutrients (boron, zinc, copper etc.) ) ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ.
  • ನಂತರ ಆ ಮಣ್ಣಿನ ಜಮೀನು ಯಾವ ಬೆಳೆಗೆ ಸೂಕ್ತ ಹಾಗು ಆ ಬೆಳೆಯ ಹೆಚ್ಚಿನ ಇಳುವರಿಗೆ ಯಾವ ರೀತಿಯ ಹಾಗು ಪ್ರಮಾಣದ ರಸಗೊಬ್ಬರ ಅವಶ್ಯಕ ಎಂಬುದನ್ನು ನಿರ್ಧರಿಸಿ ‘ಮಣ್ಣಿನ ಆರೋಗ್ಯ ಕಾರ್ಡ್’ ನಲ್ಲಿ ದಾಖಲಿಸಲಾಗುತ್ತದೆ.

 ಯೋಜನೆಯ ಸ್ವರೂಪವೇನು?

  • ರೈತರಿಗೆ ಲಾಭವಾಗಬೇಕಾದರೆ ರಸಗೊಬ್ಬರ ಮತ್ತಿತರ ಕೃಷಿ ಬಂಡವಾಳ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ರಸಗೊಬ್ಬರವನ್ನು ಸಮರ್ಪಕ ಬಳಕೆ ಮಾಡಲು ಮಣ್ಣಿನ ಫಲವತ್ತತೆ/ಅರೋಗ್ಯ ಬಹು ಮುಖ್ಯ.
  • ಈ ಯೋಜನೆಯಲ್ಲಿ ಮಣ್ಣಿನ ಫಲವತ್ತತೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ರಸಗೊಬ್ಬರ ಬಳಕೆಯ ಬಗ್ಗೆ ಮಾಹಿತಿ ನೀಡುವುದರಿಂದ ರೈತರು ಕಡಿಮೆ ಪ್ರಮಾಣದ ರಸಗೊಬ್ಬರ ಬಳಕೆ ಮಾಡಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿ.

 

 

 

ONLY FOR PRELIMS

6.ಹರಿತ್ ದಿವಾಲಿ ಸ್ವಸ್ವ್ಹ ದಿವಾಲಿ

  • ‘ ಹರಿತ್ ದಿವಾಲಿ ಸ್ವಸ್ವ್ಹ ದಿವಾಲಿ  ಪರಿಸರಸ್ಹೇಹಿ ದೀಪಾವಳಿಗೆ ಅಭಿಯಾನ ಎನ್ನುವ ಅಭಿಯಾನಕ್ಕೆ ಕೇಂದ್ರಸರ್ಕಾರ ಚಾಲನೆ ನೀಡಿದೆ. ಮುಂದಿನ ದೀಪಾವಳಿ ಹಬ್ಬದಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ದೂರವಿರಿಸುವ ಮೂಲಕ   ಪರಿಸರಸ್ಹೇಹಿ ಹಬ್ಬ ಆಚರಿಸವ ನಿಟ್ಟಿನಲ್ಲಿ ಅರಿವು ಮೂಡಿಸಲು ಈ  ಅಭಿಯಾನ  ಆರಂಬಿಸಲಾಗಿದೆ.
  • ಕೇಂದ್ರ ಪರಿಸರ ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ  ಈ  ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.ಪ್ರತಿ ವರ್ಷ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದೀಪಾವಳಿ ನಂತರ ವಾಯುಮಾಲಿನ್ಯ ನಿಗದಿತ ಮಟ್ಟಕ್ಕಿಂತ ಹೆಚ್ಹಾಗಿರುತದೆ.
  • ಅಕ್ಟೋಬರ್ ನಲ್ಲಿ 17ರ ವಯೋಮಿತಿಯೊಗಿನ ಫಿಪಾ ವಿಶ್ವಕಪ್ ಕೂಡ ದೆಹಲಿಯಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಈ ಕ್ರಮಕ್ಕೆ ಮುoದಾಗಿದೆ

 

7.   ಮೊಟ್ಟಮೊದಲ ಸೈಬರ್ ಕೋರ್ಟ್

  • ಪ್ರಪಂಚದಲ್ಲೇ ಮೊಟ್ಟಮೊದಲ ಸೈಬರ್ ಕೋರ್ಟ್ ಆರಂಭಿಸಿದ ಹೆಗ್ಗಳಿಕೆಯನ್ನು ಚೀನಾಗಳಿಸಿದೆ.
  • ಇದು ಇಂಟರ್‍ನೆಟ್ ಆಧರಿತ ನ್ಯಾಯಾಲಯವಾಗಿದ್ದು ಪ್ರಕರಣಗಳನ್ನು  ಇ-ಕಾಮರ್ಸ್ ಹಬ್ ಹಂಗ್ಸೋಹುವಿನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
  • ಈ ಕ್ರಮವನ್ನು ಕೈಗೊಳ್ಳುವ ಪ್ರಮುಖ ಉದ್ದೇಶ ವೆಂದರೆ ಆನ್‍ಲೈನ್ ವ್ಯಾಜ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ .ಆನ್‍ಲೈನ್ ವ್ಯಾಪಾರ ವ್ಯಾಜ್ಯಗಳು ಹಾಗೂ ಕಾಪಿರೈಟ್ ದಾವೆಗಳನ್ನು ಇದು  ಪ್ರಮುಖವಾಗಿ  ನಿರ್ವಹಿಸುತ್ತದೆ.
  • ಈ ಕೋರ್ಟ್ನ ವಿಶೇಷತೆಯೆಂದರೆ ಪ್ರಕರಣಗಳನ್ನು ಆನ್‍ಲೈನ್ ಮೂಲಕವೇ ವಿಚಾರಣೆ ನಡೆಸುವುದು.

 

  1. ಬಾಡಿಗೆ ತಾಯ್ತನದಿಂದ ಕರು ಜನನ
  • ಮೊಟ್ಟಮೊದಲ ಬಾಡಿಗೆ ತಾಯ್ತನದಿಂದ ಕರು ಭಾರತದಲ್ಲಿ   ಜನಿಸಿದೆ.ಮಹಾರಾಷ್ಟ್ರದ ಪುಣೆ ಸಮೀಪದ ಇಂದಾಪುರ ಸಂಚಾರಿ ಪ್ರಯೋಗಾಲಯದಲ್ಲಿ  ವಿಟ್ರೊ ಫರ್ಟಿಲೈಸೇಷನ್ ತಂತ್ರಜ್ಞಾನವನ್ನು ಬಳಸಿ ಈ ವಿಶಿಷ್ಟ ಪ್ರಯೋಗ ನಡೆಸಲಾಗಿದೆ . 
  • ಇದರ ಮುಖ್ಯ ಉದ್ದೇಶವೆಂದರೆ ಇಂಥ ಬಾಡಿಗೆ ತಾಯ್ತನ ವಿಧಾನದ ಮೂಲಕ ಕರುವನ್ನು ಉತ್ಪಾದಿಸುವ  ದೇಸಿ ಹಸುವಿನ ತಳಿಗಳನ್ನು ಮೂಲಸ್ವರೂಪದಲ್ಲೇ ಉಳಿಸುವುದು. ಕ್ರಾಸ್ ಬ್ರೀಡಿಂಗ್‍ನಿಂದಾಗಿ ಈ ತಳಿಗಳು ನಾಶವಾಗುತ್ತಿರುವುದನ್ನು ತಡೆಯಲು ಇದು ಮಹತ್ವದ್ದಾಗಲಿದೆ . 
Share