12th SEPTEMBER- DAILY CURRENT AFFAIRS BRIEF

12th SEPTEMBER

 

1.ಭತ್ತದ ಕೃಷಿಯಿಂದಲೂ ಪರಿಸರಕ್ಕೆ ಹಾನಿ (Greenhouse gas emissions from Indian paddy fields Very High)

SOURCE https://www.thehindu.com/sci-tech/greenhouse-gas-emissions-from-indian-paddy-fields-very-high-study/article24925357.ece

 ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ-ವರದಿಯ ಪ್ರಮುಖ ಅಂಶಗಳು ಮತ್ತು ಕೃಷಿಯು ಹವಾಮಾನ ಬದಲಾವಣೆ ಮೇಲೆ  ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿ  

ಪ್ರಮುಖ ಸುದ್ದಿ

  • ವಾತಾವರಣದ ಮೇಲೆ ಭತ್ತದ ಕೃಷಿ ಉಂಟುಮಾಡುತ್ತಿರುವ ಪರಿಣಾಮ ಈ ಹಿಂದೆ ಅಂದಾಜಿಸಿದ್ದಕ್ಕಿಂತ ದುಪ್ಪಟ್ಟು ಎಂಬ ಅಂಶ ಭಾರತ ಮತ್ತು ಇತರೆ ಭತ್ತ ಬೆಳೆಯುವ ರಾಷ್ಟ್ರಗಳಲ್ಲಿ ನಡೆದಿರುವ ಅಧ್ಯಯನದ ಮೂಲಕ ಬಹಿರಂಗವಾಗಿದೆ.

 

ಮುಖ್ಯ ಅಂಶಗಳು

  • ಅಮೆರಿಕದ ಎನ್ವಿರಾನ್ಮೆಂಟಲ್ ಡಿಫೆನ್ಸ್ ಫಂಡ್(ಇಡಿಎಫ್) ನಡೆಸಿದ ವಿಶ್ಲೇಷಣಾ ವರದಿ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಸೈನ್ಸ್​ಸ್ ಆಫ್ ಯುಎಸ್​ಎ(ಪಿಎನ್​ಎಎಸ್) ಜರ್ನಲ್​ನಲ್ಲಿ ಪ್ರಕಟವಾಗಿದೆ.
  • ಇದರ ಪ್ರಕಾರ, ‘ಅನಿಯಮಿತವಾಗಿ ನೆರೆಗೆ ತುತ್ತಾಗುವ ಭತ್ತದ ಗದ್ದೆಗಳು ನೈಟ್ರಸ್ ಆಕ್ಸೈಡ್​ನ್ನು ಹೊರಸೂಸುತ್ತವೆ. ನಿಯಮಿತವಾಗಿ ನೀರು ತುಂಬಲ್ಪಟ್ಟ ಭತ್ತದ ಗದ್ದೆಗಳಿಂದ ಹೊರಸೂಸುವ ಮಿಥೇನ್ ಪ್ರಮಾಣಕ್ಕಿಂತ 45 ಪಟ್ಟು ಹೆಚ್ಚು ನೈಟ್ರಸ್ ಆಕ್ಸೈಡ್ ಕೆಲವೇ ಬಾರಿ ನೀರು ತುಂಬಿಕೊಳ್ಳುವ ಭತ್ತದ ಗದ್ದೆಗಳಿಂದ ವಾತಾವರಣ ಸೇರುತ್ತಿದೆ.’
  • ಯಥೇಚ್ಛವಾಗಿ ಭತ್ತದ ಗದ್ದೆಗಳಿರುವ ದಕ್ಷಿಣ ಭಾರತದಲ್ಲಿ ಅಧ್ಯಯನ ನಡೆಸಿದ್ದಾಗಿ ಜರ್ನಲ್​ನಲ್ಲಿ ಇಡಿಎಫ್ ಹೇಳಿದೆ.
  • ಭತ್ತದ ಗದ್ದೆಗಳಿಂದ ಹೊರಸೂಸುವ ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್ ಪ್ರಮಾಣ 600 ಕಲ್ಲಿದ್ದಲು ಕಾರ್ಖಾನೆಗಳು ಅಥವಾ ಘಟಕಗಳಿಗೆ ಸಮನಾದದ್ದು. ಕೆಲವು ಬಾರಿ ನೆರೆಗೆ ತುತ್ತಾಗುವ ಭತ್ತದ ಗದ್ದೆಗಳು ಉಗುಳುವ ನೈಟ್ರಸ್ ಅಂಶವನ್ನು ಕಡೆಗಣಿಸಲಾಗಿದೆ.
  • ದಕ್ಷಿಣ ಭಾರತದಲ್ಲಿ ಭತ್ತದ ಕೃಷಿ ನಡೆಯುವ ಗದ್ದೆಗಳಿಂದ ಹಸಿರುಮನೆ ಅನಿಲಗಳು ಕೂಡ ಹೆಚ್ಚಾಗಿಯೇ ವಾತಾವರಣ ಸೇರುತ್ತಿದೆ ಎಂದು ಸಂಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ….CLICK HERE TO READ MORE

 

Share